ಅಂಬರೀಶನಿಗೆ ಇದೇ ೧೧ ರಿಂದ ತೃತೀಯ ಹಂತದ ಚಿತ್ರೀಕರಣ
Posted date: 14 Thu, Nov 2013 – 09:46:27 AM

  ಅಂಬರೀಶ ಎಂದ ತಕ್ಷಣ ಜ್ಞಾಪಕಕ್ಕೆ ಬರುವುದು ಕನ್ನಡ ಚಿತ್ರರಂಗದ ಹೆಸರಾಂತ ರೆಬಲ್‌ಸ್ಟಾರ್, ಮಂಡ್ಯದ ಗಂಡು ಎಂದೇ ಖ್ಯಾತಿಯಾಗಿರುವ ಈಗಿನ ವಸತಿ ಸಚಿವರಾದ ಅಂಬರೀಶ್.
    ಅಂಬರೀಶ ಹೆಸರಿನ ಚಿತ್ರವೊಂದು ಈಗ ತಯಾರಾಗುತ್ತಿದೆ.  
ಸುಖಧರೆ ಪಿಕ್ಚರ‍್ಸ್ ಲಾಂಛನದಡಿಯಲ್ಲಿ ಮಹೇಶ್ ಸುಖಧರೆ ನಿರ್ಮಿಸಿ ನಿರ್ದೇಶಿಸುತ್ತಿರುವ ಅಂಬರೀಶನಿಗೆ ಇದೇ ೧೧ ರಿಂದ ನಗರದ ಸುತ್ತಮುತ್ತ  ಮೂರನೇ ಹಂತದ ಚಿತ್ರೀಕರಣ ನಡೆದಿದೆ.
    ಒಂದು ತಿಂಗಳ ಕಾಲ ನಡೆಯುವ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್, ಪ್ರಿಯಾಮಣಿ,  ಸುಮಲತಾ, ಸಾಧು ಕೋಕಿಲ, ರಾಜೇಂದ್ರ ಕಾರಂತ್, ಶರತ್ ಲೋಹಿತಾಶ್ವರ ಮೇಲೆ ಹಲವಾರು ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಲಾಗುವುದು ಎಂದು ನಿರ್ಮಾಪಕ ಕಂ ನಿರ್ದೇಶಕ ಸುಖಧರೆ ತಿಳಿಸಿದ್ದಾರೆ.
    ಚಿತ್ರಕ್ಕೆ ಕಥೆ, ಸಂಭಾಷಣೆ ಚಿಂತನ್, ಛಾಯಾಗ್ರಹಣ ಸತ್ಯ, ಸಂಗೀತ ಹರಿಕೃಷ್ಣ, ಕಲೆ ಈಶ್ವರಿ ಕುಮಾರ್, ಸಾಹಸ ರವಿವರ್ಮ, ನೃತ್ಯ ಮುರುಳಿ, ಗಣೇಶ್, ಕಲೈ, ಸಂಕಲನ ಪ್ರಕಾಶ್, ನಿರ್ಮಾಣ ಮೇಲ್ವಿಚಾರಣೆ ಮೋಹನ್, ನಿರ್ಮಾಣ ನಿರ್ವಹಣೆ ಅನಿಲ್‌ಕುಮಾರ್, ಚಿತ್ರದ ಸಹ ನಿರ್ಮಾಪಕರು ಮಹೇಶ್ ನಂಜಯ್ಯ, ಎಂ.ಸುರೇಶ್.
    ತಾರಾಗಣದಲ್ಲಿ ದರ್ಶನ್, ಪ್ರಿಯಾಮಣಿ, ಡಾ|| ಅಂಬರೀಶ್, ಸುಮಲತಾ, ಉಮಾಶ್ರೀ, ಸಾಧುಕೋಕಿಲ, ಶರತ್ ಲೋಹಿತಾಶ್ವ, ಬುಲೆಟ್ ಪ್ರಕಾಶ್, ರವಿಶಂಕರ್, ರಾಜೇಂದ್ರ ಕಾರಂತ್, ಸಿದ್ಧಾರ್ಥ (ಬಾಂಬೆ), ಬಿರಾದಾರ್, ರೋಹಿತ್, ಭರತ್, ಸತೀಶ್, ಬೆಸ್ಟ್‌ಕ್ಲಬ್ ಆರ್. ಅರುಣಾಚಲಂ, ಜಯರಾಂ, ಚೇತನ, ಲೋಕಿ, ಉದಯ್, ಚೇತನ್ ಮುಂತಾದವರಿದ್ದು ಮತ್ತೊಬ್ಬ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಿಶಾ ಯೋಗೀಶ್ವರ್ ಅನಾರೋಗ್ಯದ ಕಾರಣ ಚಿತ್ರದಿಂದ ಹೊರಬಂದಿದ್ದು, ಅವರ ಜಾಗಕ್ಕೆ ರಚಿತಾರಾಮ್ ಆಯ್ಕೆಯಾಗಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed